"#KSDL (ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ) ಸೇರುವೆಗೆ ಮರುಹುಟ್ಟು ನೀಡಿ ಆಗೆಯತ್ತ ಮುನ್ನಡೆಸಿದಂತೆಯೇ ಇದೀಗ ಕರ್ನಾಟಕ ಆಡಳಿತದ ಒಡೆತನದ ಮೈಸೂರು ಪೈಂಟ್ಸ್ & ವಾರ್ನಿಶ್ ಲಿಮಿಟೆಡ್ ಸೇರುವೆಗೂ ಹೊಸ ಹುಟ್ಟು ನೀಡಲಿದ್ದೇವೆ." ಎನ್ಬುದಾಗಿ ಕೈಗಾರಿಕೆ ಆಳುಗ ಎಮ್. ಬಿ . ಪಾಟೀಲ ಅವರು ತಿಳಿಸಿದ್ದಾರೆ .
ಇನ್ಮುಂದೆ ಆಡಳಿತದ ಎಲ್ಲಾ ಕಟ್ಟಡಗಳಿಗೆ ಮೈಸೂರು ಪೇಂಟ್ಸ್ ಒಗರು ಬಳಕೆಗೆ ತೀರ್ಮಾನಿಸಲಾಗಿದೆ ಎನ್ನಲಾಗಿದೆ. ಇದಲ್ಲದೇ ಇನ್ನೂ ಹೆಚ್ಚಿನ ಹೊಸತನ ನೀಡುವ ಕೆಲಸಗಳ ಮೂಲಕ ೨೦೨೪-೨೫ ನೇ ಸಾಲಿನಲ್ಲಿ ೫೦೦ ಮಡಿ ರೂಪಾಯಿಗಳ ಆಗೆ ಗಳಿಕೆಯ ಗುರಿ ಹೊಂದಲಾಗಿದೆಯಂತೆ.
"ಈ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕಟ್ಟಿ ಬೆಳೆಸಿದ ಸೇರುವೆಗಳನ್ನು ಮತ್ತಶ್ಟು ಏಳಿಗೆಯತ್ತ ಕೊಂಡೊಯ್ಯಲಿದ್ದೇವೆ" ಎಂದು ಪಾಟೀಲ ಅವರು ತಿಳಿಸಿದ್ದಾರೆ . #MPVL
ಈಗಾಗಲೇ ಒಕ್ಕೂಟದ ಆಯ್ಕುಳಿಗಳ ಹೊತ್ತಿನಲ್ಲಿ ನಿಮ್ಮ ಉಗುರಿಗೆ ಬಳಿಯುವ ಗುರುತಿನ ಓಗರನ್ನು ಒದಗಿಸುತ್ತ ಇರುವುದು ನಮ್ಮ ನಾಡಿನದೇ ಆಗಿರುವ ಮಯ್ಸೂರು ಒಗರು ಸೇರುವೆ ಅನ್ನುವುದನ್ನು ಇಲ್ಲಿ ಗಮನಿಸಬಹುದು .
ಸರ್ಕಾರಿ ಕಟ್ಟಡಗಳಿಗೆ ಮೈಸೂರು ಪೇಂಟ್ಸ್ ರಂಗು!#KSDL (ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ) ಕಾರ್ಖಾನೆಗೆ ಮರುಹುಟ್ಟು ನೀಡಿ ಲಾಭದತ್ತ ಮುನ್ನಡೆಸಿದಂತೆಯೇ ಇದೀಗ ಸರ್ಕಾರಿ ಸ್ವಾಮ್ಯದ ಮೈಸೂರು ಪೈಂಟ್ಸ್ & ವಾರ್ನಿಶ್ ಲಿಮಿಟೆಡ್ ಸಂಸ್ಥೆಗೂ ಕಾಯಕಲ್ಪ ನೀಡಲಿದ್ದೇವೆ.
— M B Patil (@MBPatil) August 18, 2024
ಇನ್ಮುಂದೆ ಸರ್ಕಾರದ ಎಲ್ಲಾ ಕಟ್ಟಡಗಳಿಗೆ ಮೈಸೂರು ಪೇಂಟ್ಸ್ ಬಣ್ಣ… pic.twitter.com/uAbrKS0S9h